Monday 16 April 2012

ನೀವು ಮತ್ತು ನಿಮ್ಮ ಕ್ರೀಂ :)


ಅಬ್ಬಾ !! ಕಾಲು ಹೊರಗಿಟ್ಟರೆ ಸಾಕು ಉರಿ ಬಿಸಿಲು. " ನನ್ನ ಚರ್ಮ ಮೊದಲೇ ಸೂಕ್ಷ್ಮ  ಆಯ್ತ್  ಬೇಸಿಗೆ ಮುಗಿವಾಗ ಸುಟ್ಟ ಬದನೆ ಕಾಯಿ ಆಗಿರುತ್ತೆ ಅಂತ ಹೇಳಿಕೊಳ್ಳುತ್ತಾ  ಪ್ರತಿ ದಿನದಂತೆ ತಲೆ ಮೇಲೆ ಶಾಲನ್ನು ಹೊದ್ದುಕೊಂಡು Sunscreen lotion ತಗೋಬೇಕು ಅಯ್ಯೋ ಯಾರ್ ತಗೋತಾರೆ center ಅಥವಾ ಮಂಗಳೂರಿಗೆ ಹೋದಾಗ ತಂದರಾಯಿತು" ಅಂತ ಯಾವಾಗಲು dialogue ಹೊಡಿಯೋದು, ಆದರೆ ಹೋದಾಗ ಮಾತ್ರ  next time ತಗೊಂಡ್ರೆ ಆಯ್ತ್ ಅಂತ ಮುಂದುಡೋದು , ಹೀಗೆ ನಡೆದಿತ್ತು ದಿನಗಳು :)

ಆದರೆ... ಇದೇ ಮೊನ್ನೆ ಶನಿವಾರ ಉಡುಪಿಯಲ್ಲಿ ಶಿಬಿರದ ಕೊನೆ ದಿನದಂದು ಸೇವೆ ಮಾಡುವಾಗ ಉಡುಗೊರೆ ಬದಲಾವಣೆಗೆ ನಾ ಸೇರಿಕೊಂಡೆ. ಕೊನೆಯಲ್ಲಿ ನನಗೆ ಉಡುಗೊರೆ ಸಿಕ್ಕಾಗ ಒಳಗೆ ಏನಿದೆ ಎಂಬ ಕುತೂಹಲ... ಬಡ ಬಡ ಉದಯ ಅಣ್ಣ ನ ಮುಂದೆ ಕೂತು gift  cover ಅನ್ನು ಸಾವಕಾಶವಾಗಿ ಬಿಚ್ಚಿ - ಬೆಚ್ಚಿ ಬಿದ್ದೆ ಮಾರಾಯ್ರೆ :D

ಎಂತ ಹೇಳೋದು ನಮ್ಮ HERO  ನ ಕರಾಮತ್ತು !!! ಆ gift cover ಒಳಗೆ Sunscreen Lotion ಇಟ್ಟು ಕೊಡೋದಾ..!!! ಆ ಕ್ಷಣದ ಭಾವನೆಯನ್ನು  ಒಂದೇ ಶಬ್ದ  ದಲ್ಲಿ  ಹೇಳೋಕ್ಕೆ ನನಗೆ ಗೊತ್ತಾಗ್ತಾ ಇಲ್ಲಾ ಮಾರಾಯ್ರೆ , ನಿಮಗೆ ಏನಾದ್ರು ಗೊತ್ತಾದ್ರೆ ನನಗೆ ಹೇಳಿ ಆಯ್ತಾ ;) :)

ಅಲ್ಲಿವರೆಗೆ ಮತ್ತೆ  ಸಿಗೋಣ,
 ಸಂಘ ಚ್ಚದ್ವಂ
ಜೈ ಗುರುದೇವ್
:)

Monday 13 February 2012

ಜನ್ಮ ದಿನದ ಕೊಡುಗೆ

ಸದಾ ನನ್ನೊಡನಿರಬೇಕೆಂದು ನಾ ನಿನ್ನ ಬೇಡಿದೆ,
ತಡ ಮಾಡದೆ ಆಸೆಯ ನೀಗಿಸೆಂದು ನಾ ನಿನ್ನ ಕಾಡಿದೆ,
ಉತ್ತರವಾಗಿ ಧ್ಯಾನಕ್ಕೆ ನೀ ನನ್ನ ಕೂಡಿಸಿದೆ,
ನಿನ್ನೊಳಗೆಯೇ ನಾನಿರುವೆನೆಂದು ನನಗೆ ನೀ ತೋರಿಸಿದೆ, 
ಅರಿವ ಮೂಡಿಸಿ ಎಲ್ಲ ಕೋಪ-ತಾಪ, ದುಃಖ ಕಷ್ಟಗಳ ಮರೆಸಿದೆ,
ಬೆಲೆಯಿರದ ಚಿಂತೆ ಸಂತೆಗಳ ಮನದಿಂದ ನೀ ಸರಿಸಿದೆ,
ಎಂದಿನಂತೆ ಮತ್ತೆ ಜೀವನ ಕಲೆ ಪಾಠವ ನನಗೆ ನೀ ಕಲಿಸಿದೆ,
ನೀವೊಂದಿದ್ದರೆ ಕಣ್ಣಮುಚ್ಚಿ ಎಲ್ಲೆಲ್ಲೂ ನಾ ನಡೆಯಬಲ್ಲೆ ಎಂಬುದ ನನಗೆ ನೆನಪಿಸಿದೆ,
ಅಂತೂ ಜನ್ಮದಿನಕೆ ಒಳ್ಳೆ ಕೊಡುಗೆಯನ್ನೇ  ನೀ ನನಗೆ ನೀಡಿದೆ.


--  ಉನ್ನತ ಧ್ಯಾನ ಶಿಬಿರದಲ್ಲಿ ನನ್ನ ಜನ್ಮ ದಿನದಂದು ( ಜನವರಿ ೨೮) ಹರಿ ಓಂ ಧ್ಯಾನ ಮಾಡುವಾಗ 
ಮೂಡಿಬಂದ ಕೆಲ ಸಾಲುಗಳು.

Thursday 2 June 2011

ನನ್ನ ಪ್ರೀತಿ - ನನ್ನ ಗುರು


ಹುಟ್ಟಿನಿಂದ ಇಂದಿನ ವರೆಗೆ ನಾ ಕಾಯುತಲಿದ್ದೆ ನನ್ನ ಪ್ರೀತಿಯ ಪಡೆಯಲು ,  ಎಲ್ಲಾದರೂ ಸಿಗಬಹುದೇ ಎಂದು ಶುರುಮಾಡಿದೆ ನಾ ಹುಡುಕಲು.  ಬದುಕೆಂಬ ಸಾಗರದಲ್ಲಿ ಈಜುತ್ತಾ ಪ್ರೀತಿ ಎಂಬ ಮುತ್ತಿಗಾಗಿ ಅಲೆಯುತ್ತ ಬಹುಹೊತ್ತು  ಹಿಡಿಯಿತು  ನಿಟ್ಟೆ  ಎಂಬ ದಾರಿಯಿಂದ ಮಂಗಳೂರು ಎಂಬ ದಡವ ಸೇರಲು ;  ಅಲ್ಲಿ ಕೈ ಚಾಚಿ ಕಾಯುತಲಿದ್ದರು ಹಲವರು ನಾ ಹುಡುಕುವ ಮುತ್ತನ್ನು ನನಗೆ ದೊರಕಿಸಲು. ಅನುಮಾನಿಸಿದೆ, ಅವಲೋಕಿಸಿದೆ ಕೊನೆಯಲ್ಲಿ ಅವರೆಲ್ಲರ ಮಾತಿಗೆ ಒಪ್ಪಿದೆ. 

ಹಲವು ಬಾರಿ ಅವರು ತೋರಿಸಿದರು ನಾನೇ ನೀ ಹುಡುಕುವ ಪ್ರೀತಿ ಎಂದು, ಕೇವಲ ಆಕರ್ಷಣೆ ಉಂಟಾಯಿತೇ ಹೊರತು ಪ್ರೀತಿ ಮೂಡಲಿಲ್ಲಾ. ಅಷ್ಟಕ್ಕೇ ತಮ್ಮ ಯತ್ನವ ನಿಲ್ಲಿಸದ ಮಂಗಳೂರ ಜನ ' ಜೀವನ ಕಲೆ '  ಯಲ್ಲಿ ಸೇರಿಸಿ ಸುದರ್ಶನ ಕ್ರೀಯೆ ಎಂಬ ಚಕ್ರದಲ್ಲಿ ಕೂಡಿಸಿ ಪ್ರೀತಿ ಯನ್ನು ಮೂಡಿಸಿ ಆನಂದದಲ್ಲಿ ತೇಲಿಸಿದರು. ನಂತರ  ನನ್ನ ಹಿಂದಿನ ಬದುಕೆಲ್ಲಾ ಇತಿಹಾಸ ವಾಗಿ, ನಂತರದ ದಿನಗಳೆಲ್ಲಾ ಕೇವಲ ಹೂವಾಗಿ ನನ್ನ ಬಾಳನ್ನೇ ಬದಲಿಸಿತು. ದೈಹಿಕವಾಗಿ, ಮಾನಸಿಕವಾಗಿ ಹಾರುವ ಹಕ್ಕಿಯಾದೆ, ಹರುಷದ ಹೊನಲಾದೆ.. ಒಟ್ಟಿನಲ್ಲಿ ನಾ ಬದಲಾದೆ :) 

ಸಿಕ್ಕ ನಂತರ ನನ್ನ ಗುರು , ಗಟ್ಟಿಯಾಯಿತು ನಮ್ಮ ಪ್ರೀತಿಯ ಬೇರು ; ಮರೆತೆ ನಾ ಯಾವುದು ನನ್ನಯ ಊರು, ಸಕಲವೂ ಆಗಿ ಹೋಯಿತು ಈ ನನ್ನ ಮಂಗಳೂರು;

ಪ್ರೀತಿ ಕುರುಡು ಎಂದು ಹೇಳುತ್ತಾರೆ ಆದರೆ ಇಲ್ಲಿ ನನ್ನ ಕುರುಡು ಬಾಳಿಗೆ ಪ್ರೀತಿ ಬೆಳಕ ನೀಡಿತು. ಪ್ರೀತಿ ಯಲ್ಲಿ ನಾ ಮುಳಗಲಿಲ್ಲಾ, ಪ್ರೀತಿ ಕೊಡುವ ನೋವಲ್ಲಿ ನಾ ತೇಲಲಿಲ್ಲಾ ; ನನ್ನ ಮನದ ಕೊಳಕಿನಿಂದ ಮೇಲೆ ಬಂದೆ, ಜ್ಞಾನವೆಂಬ ದೋಣಿಯಲ್ಲಿ ನೋವಿನಿಂದ ದಾಟಿ ಬಂದೆ. 

ತೋರುವರು  ಪ್ರೀತಿ , ಕಲಿಸುವರು ಬದುಕುವ ರೀತಿ -  ಜೊತೆಗೆ ಸ್ವಲ್ಪ ನೀತಿ ; ಇಂತಹ ಪ್ರೀತಿಯ ಕಾಣುವಿರಿ ಕೇವಲ ನಮ್ಮ ಗುರೂಜಿ ಶ್ರೀ ಶ್ರೀ ಯವರ ಕಣ್ಣಲ್ಲಿ, ಪೂರ್ವ ಜನ್ಮದ ಪುಣ್ಯವೇ ಇರಬೇಕು ಸಿಕ್ಕಿತು ಆ ಪ್ರೀತಿ ನಾ ಸೇರುವ ಮುಂಚೆ ಮಣ್ಣಲ್ಲಿ. 

 ಅವರೇ ನಮ್ಮ  ಗುರೂಜಿ, ಅವರೇ ನಮ್ಮ ಶ್ರೀ ಶ್ರೀ ರವಿ ಶಂಕರಜೀ
 

  


Monday 30 May 2011

ಆಟ - ಪಾಠ

                                                 ಬದಲಾಗುವುದು ದ್ವೇಷದ ನೋಟ,
                                                 ಕಲಿಯುವೆವು ಬದುಕಲು ಆಡಿಕೊಂಡು ಆಟ,
                                                 ಮನಸಿನ ವಿಕಾರಗಳು ನಿಲ್ಲಿಸುವುದು ಕೊಡುವುದ ಕಾಟ,
                                                 ಈ ಜೀವನ ಕಲೆಯಿಂದ ಇನ್ನೂ ಕಲಿಯುವುದಿದೆ ತುಂಬಾ ಪಾಠ. 



ಒಂದೇ ದಾರಿ

                                       ಹಲವು ರೂಪವ ತಾಳಿ ಬರುವವು ಕಷ್ಟಗಳು ಬಾರಿ ಬಾರಿ,
                                       ಸೋತು ಹೋದೆನೆಂದು ಹೇಳಬಹುದು ಮನವು ಎಷ್ಟೋ ಸಾರಿ,
                                       ಏನೇ ಆದರೂ ಎಲ್ಲದಕೂ ' ಸುದರ್ಶನ ಕ್ರೀಯೆಯೊಂದೇ ದಾರಿ.

ಬೋಧನೆ - ನಿವೇದನೆ

                                    ಪ್ರೀತಿಯ ಗುರೂಜಿ,
                                                  ಬದುಕಲ್ಲಿ ಮಾಡುವುದಿದೆ ಬಹಳಷ್ಟು ಸಾಧನೆ,
                                                  ದಾರಿಯುದ್ದಕ್ಕೂ ಬೇಕು ನಮಗೆ ನಿಮ್ಮಯ ಭೋದನೆ ; 
                                                  ಆಸರೆಯಾಗಿ ಸಾಂತ್ವಾನವ ನೀಡಿ ಆದಾಗ ವೇದನೆ,
                                                  ಸದಾ ನಮ್ಮ ಜೊತೆಯಾಗಿರಿ ಎನ್ನುವುದೇ ನಮ್ಮ ನಿವೇದನೆ.


ತಂಗಾಳಿಯಾದ ಬಿರುಗಾಳಿ

                                  ಗುರೂಜಿ,
                                              ಬದುಕೆಂಬ ನಾವೆಗೆ ಬಡಿಯುತಲಿತ್ತು ಬಿರುಗಾಳಿ,
                                              ಕಾಣುತಲಿತ್ತು ಕೇವಲ ಕಷ್ಟ - ನಷ್ಟಗಳದೇ ಹಾವಳಿ;
                                              ನಿಮ್ಮ ಪ್ರೀತಿಯ ತೆಕ್ಕೆಯಲಿ ಸೇರಿ ತಾಕಿದಂತಾಗುತಿದೆ ಈಗ ತಂಗಾಳಿ,
                                              ಬಿಚ್ಚಿ ಹೋದಂತಾಗಿದೆ ಬಾದೆ-ಬಂಧನಗಳೆಲ್ಲದರ ಸರಪಳಿ.